ಹತ್ತಿ ಬೆಳೆದ ರೈತರು ಪ್ರತಿ ಎಕರೆಗೆ ರೂ 50 ಸಾವಿರ ನಷ್ಟ ಅನುಭವಿಸಿದ್ದಾರೆ. ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡದೇ ವರದಿ ತಯಾರಿಸಿದ್ದಾರೆ. ಇಂತಹ ವರದಿಯನ್ನು ಉಪ ಲೋಕಾಯುಕ್ತರಿಗೆ ನೀಡಿದ್ದಾರೆ ಎಂದು ದೂರಿದರು.
ಹೊನ್ನೂರು ಮಂಜಪ್ಪ, ಸಿದ್ದವೀರಪ್ಪ, ನರಸೀಪುರ ಮಂಜುನಾಥ, ಶ್ರೀಕಂಠಾಪುರ ಆಂಜನೇಯ, ನಾಗನೂರು ಕರಿಬಸಪ್ಪ, ಕುಂದುವಾಡ ಚಂದ್ರ, ಗೋಶಾಲೆ ಬಸವರಾಜ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.