ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ರೈಲು ಮಾರ್ಗ, ವೇಳಾಪಟ್ಟಿ ಬದಲು

Last Updated 14 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು:  ತಮಿಳುನಾಡಿನ ಚಿಟ್ಟೇರಿ ರೈಲು ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ರೈಲು ಅಪಘಾತದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ತನ್ನ ಕೆಲವು ರೈಲುಗಳು ಸಂಚರಿಸುವ ಮಾರ್ಗ ಮತ್ತು ಸಂಚಾರದ ವೇಳೆಯನ್ನು ಬದಲಿಸಿದೆ.

ಮಾರ್ಗ ಬದಲಾದ ರೈಲುಗಳ ವಿವರ: ಗಾಡಿ ಸಂಖ್ಯೆ: 15228, ಮುಜಾಫರ್‌ಪುರ್- ಯಶವಂತಪುರ ಎಕ್ಸ್‌ಪ್ರೆಸ್ ರೈಲು ಚೆನ್ನೈ ಎಗ್ಮೋರ್, ವಿಲ್ಲುಪುರಂ, ವೃದ್ಧಾಚಲಂ ಹಾಗೂ ಸೇಲಂ ಮಾರ್ಗವಾಗಿ ಸಂಚರಿಸಲಿದೆ.

ಗಾಡಿ ಸಂಖ್ಯೆ: 12510, ಗುವಾಹಟಿ- ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಗುಡೂರು, ರೇನಿಗುಂಟ, ಕಾಟ್ಪಾಡಿ ಹಾಗೂ ಜೋಲಾರ್‌ಪೇಟೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

ಗಾಡಿ ಸಂಖ್ಯೆ: 22601, ಚೆನ್ನೈ- ಶಿರಡಿ ಎಕ್ಸ್‌ಪ್ರೆಸ್ ರೈಲು ಜೋಲಾರ್‌ಪೇಟೆ, ಕೃಷ್ಣರಾಜಂ ಹಾಗೂ ಧರ್ಮಾವರಂ ಮಾರ್ಗದ ಬದಲು ಅರಕ್ಕೋಣಂ, ರೇನಿಗುಂಟ, ಗುಂತಕಲ್ ಹಾಗೂ ರಾಯಚೂರು ಮಾರ್ಗವಾಗಿ ಸಂಚರಿಸಲಿದೆ.

ಗಾಡಿ ಸಂಖ್ಯೆ:12245 ಹೌರಾ- ಯಶವಂತಪುರ ಎಕ್ಸ್‌ಪ್ರೆಸ್ ರೈಲು ರೇನಿಗುಂಟ, ಪಕ್ಕಳ, ಕಾಟ್ಪಾಡಿ ಹಾಗೂ ಜೋಲಾರ್‌ಪೇಟೆ ಮಾರ್ಗವಾಗಿ ತೆರಳಲಿದೆ.

ವೇಳಾಪಟ್ಟಿ ಬದಲಾದ ರೈಲಿನ ವಿವರ: ಚೆನ್ನೈನಿಂದ ಮಧ್ಯಾಹ್ನ 1.35ಕ್ಕೆ ಹೊರಡಬೇಕಿದ್ದ ಚೆನ್ನೈ- ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ಗಾಡಿ ಸಂಖ್ಯೆ: 12609) ಸಂಜೆ 5 ಗಂಟೆಗೆ ಹೊರಡಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT