ಅನಾರೋಗ್ಯದಿಂದ ಬಳಲುತ್ತಿದ್ದ, ನಮ್ಮ ನಿಮ್ಮಂತೆ ಒಬ್ಬ ಸಾಧಾರಣ ಮನುಷ್ಯನಾಗಿದ್ದ ನರೇಂದ್ರನಾಥ್ ಎಲ್ಲ ಧರ್ಮಗ್ರಂಥಗಳನ್ನೂ ಅಧ್ಯಯನ ಮಾಡಿ,ಧರ್ಮದ ನಿಜವಾದ ತತ್ವಗಳ ಸಾರವನ್ನು ಹೀರಿ ಶಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ತತ್ವಗಳನ್ನು ಎತ್ತಿ ಹಿಡಿದ ಧೀಮಂತನಾಗಿ ಎತ್ತರವನೇರಿದ್ದು ಅವರಲ್ಲಿದ್ದ ಇಚ್ಛಾಶಕ್ತಿ, ಕ್ರಿಯಾಶೀಲತೆ ಮತ್ತು ಅಧ್ಯಯನಶೀಲತೆಗಳಿಂದ.
ಮಟ್ಟು ಅವರು ತಮ್ಮ ಲೇಖನವನ್ನು ಮುಗಿಸುತ್ತ `ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತಾ ಸಾಧ್ಯ. ಅದಕ್ಕಾಗಿ ಆತ `ವಿವೇಕಾನಂದ~ ಆಗಿರಬೇಕು- ಎಂದು ಬರೆದಿರುವುದು ಅವರ ವ್ಯಕ್ತಿತ್ವವನ್ನು ಇನ್ನಷ್ಟು ಪ್ರಖರಗೊಳಿಸಿದೆ.