ಯಲಹಂಕ: ಸರ್ವಜ್ಞನಗರ ಕ್ಷೇತ್ರದ ಎಚ್ಬಿಆರ್ ವಾರ್ಡ್ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ 2.80 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಈಚೆಗೆ ಗುದ್ದಲಿಪೂಜೆ ನೆರವೇರಿಸಿದರು.
ಬೈರವೇಶ್ವರ ಬಡಾವಣೆಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಆಗಮಿಸಿದ ಸಚಿವರಲ್ಲಿ, `ತೆರೆದ ಚರಂಡಿಯಲ್ಲಿ ಹೂಳು ತೆಗೆಯದೆ ಸ್ಲ್ಯಾಬ್ ಅಳವಡಿಸಿ, ಕಳಪೆ ಕಾಮಗಾರಿ ಮಾಡಲಾಗಿದೆ' ಎಂದು ಸ್ಥಳೀಯರು ದೂರಿದರು. ಕೂಡಲೇ ಬಿಲ್ ತಡೆಹಿಡಿಯುವಂತೆ ಪಾಲಿಕೆ ಸಹಾಯಕ ಎಂಜಿನಿಯರ್ ಜಗದೀಶ ಅವರಿಗೆ ಸಚಿವರು ಸೂಚಿಸಿದರು.