ಅಮೃತಸರ (ಪಿಟಿಐ): ಅಮೃತಸರದ ಬಿಜೆಪಿ ಅಭ್ಯರ್ಥಿ ಅರುಣ್ ಜೇಟ್ಲಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಮರಿಂದರ್ ಸಿಂಗ್ ಅವರು ಭಾನುವಾರ ಬೆಳಗಿನ ನಡಿಗೆ ಸಂದರ್ಭದಲ್ಲಿ ಪರಸ್ಪರ ಭೇಟಿಯಾದ ಅಪರೂಪದ ದೃಶ್ಯ ಕಂಡುಬಂದಿತು.
ಇಷ್ಟು ದಿನ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದ ಒಂದೇ ಲೋಕಸಭಾ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು, ಭೇಟಿ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಕೈ ಕುಲುಕಿ, ಮಾತನಾಡಿದ್ದಕ್ಕೆ ಸಾರ್ವಜನಿಕರು ಸಾಕ್ಷಿಯಾದರು. ಆದರೆ ಈ ಅವಕಾಶವನ್ನು ಉಪಯೋಗಿಸಿಕೊಂಡ ಅಮರಿಂದರ್ ಅವರು ಜೇಟ್ಲಿ ಅವರನ್ನು, ‘ದೆಹಲಿಯಿಂದ ಬಂದ ಅತಿಥಿಯನ್ನು ಇಲ್ಲಿ ನೋಡುತ್ತಿರುವುದು ಸಂತಸದ ಸಂಗತಿ’ ಎಂದು, ಜೇಟ್ಲಿ ‘ಹೊರಗಿನವರು’ ಎಂಬಂತೆ ಕಿಚಾಯಿಸಿದರು.