ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರಿಂದರ್‌–ಜೇಟ್ಲಿ ಭೇಟಿ

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಮೃತಸರ (ಪಿಟಿಐ): ಅಮೃತಸರದ ಬಿಜೆಪಿ ಅಭ್ಯರ್ಥಿ ಅರುಣ್‌ ಜೇಟ್ಲಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಅಮರಿಂದರ್‌ ಸಿಂಗ್‌ ಅವರು ಭಾನುವಾರ ಬೆಳಗಿನ ನಡಿಗೆ ಸಂದರ್ಭದಲ್ಲಿ ಪರಸ್ಪರ ಭೇಟಿಯಾದ ಅಪರೂಪದ ದೃಶ್ಯ ಕಂಡುಬಂದಿತು.

ಇಷ್ಟು ದಿನ  ಆರೋಪ ಪ್ರತ್ಯಾರೋಪ­ದಲ್ಲಿ ತೊಡಗಿ­ದ್ದ ಒಂದೇ ಲೋಕಸಭಾ ಕ್ಷೇತ್ರದ ಇಬ್ಬರು ಅಭ್ಯರ್ಥಿ­ಗಳು, ಭೇಟಿ ಸಂದರ್ಭದಲ್ಲಿ ಒಬ್ಬರಿ­ಗೊಬ್ಬರು ಕೈ ಕುಲುಕಿ, ಮಾತನಾಡಿದ್ದಕ್ಕೆ ಸಾರ್ವ­ಜನಿಕರು ಸಾಕ್ಷಿಯಾದರು. ಆದರೆ ಈ ಅವಕಾಶವನ್ನು ಉಪಯೋಗಿ­ಸಿ­ಕೊಂಡ ಅಮ­ರಿಂದರ್‌ ಅವರು ಜೇಟ್ಲಿ ಅವರನ್ನು, ‘ದೆಹಲಿಯಿಂದ ಬಂದ ಅತಿಥಿ­ಯನ್ನು  ಇಲ್ಲಿ ನೋಡುತ್ತಿರುವುದು ಸಂತಸದ ಸಂಗತಿ’ ಎಂದು, ಜೇಟ್ಲಿ ‘ಹೊರಗಿನ­ವರು’ ಎಂಬಂತೆ ಕಿಚಾಯಿಸಿ­ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT