ನವದೆಹಲಿ (ಐಎಎನ್ಎಸ್): 2 ಜಿ ತರಂಗಾಂತರ ಹಂಚಿಕೆಯಲ್ಲಿ ಆದ ಭ್ರಷ್ಟಾಚಾರವನ್ನು ಪಟ್ಟುಬಿಡದೆ ಬಯಲಿಗೆ ಎಳೆದ ಅರ್ಜಿದಾರರನ್ನು ಕೋರ್ಟ್ ಗುರುವಾರ ಶ್ಲಾಘಿಸಿತು.
ಈ ಜಾಗರೂಕ ಅರ್ಜಿದಾರರು ಇಲ್ಲದೇ ಹೋಗಿದ್ದರೆ, ಹಣ ಬಲ ಇರುವ ವಂಚಕರು ನೈಸರ್ಗಿಕ ತರಂಗಗಳನ್ನು ಕಬಳಿಸಿರುವುದು ರಾಷ್ಟ್ರದ ಜನತೆಗೆ ಗೊತ್ತೇ ಆಗುತ್ತಿರಲಿಲ್ಲ ಎಂದು ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಮತ್ತು ಎ.ಕೆ. ಗಂಗೂಲಿ ಅವರು ತೀರ್ಪು ನೀಡುವ ವೇಳೆ ಹೇಳಿದರು.