ಲೇಖಕ ಹಾಗೂ ಚಿಂತಕ ರಾಜಸ್ತಾನದ ಡಾ. ಓಂ. ಆನಂದ ಸರಸ್ವತಿ ಅವರ ಸಾನ್ನಿಧ್ಯ ಹಾಗೂ ಕೆ.ಎಲ್.ಇ. ಸೊಸೈಟಿಯ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಅಧ್ಯಕ್ಷತೆಯಲ್ಲಿ 15ರಂದು ಬೆಳಿಗ್ಗೆ ನಡೆಯಲಿರುವ ಸಮಾರಂಭದಲ್ಲಿ ಹಿರಿಯ ಲೇಖಕ ಡಾ. ಅಮರ್ ಸಿಂಗ್ ವಧಾನ್ ವಿಚಾರ ಸಂಕಿರಣ ಉದ್ಘಾಟಿಸುವರು. ಬನಾರಸ್ ಹಿಂದಿ ವಿವಿಯ ಹಿಂದಿ ವಿಭಾಗದ ಡಾ. ವಿನಯ ಕುಮಾರ್ ಸಿಂಗ್, ಹೈದರಾಬಾದ್ನ ಡಾ. ತೇಜಸ್ವಿ ಕಟ್ಟಿಮನಿ, ಧಾರವಾಡ ವಿವಿಯ ಡಾ. ಎಂ. ಧವನ್, ಬೆಳಗಾವಿಯ ಡಾ.ವಿ.ಎಸ್. ಸಾಧುನವರ ಮುಂತಾದವರು ಅತಿಥಿಗಳಾಗಿರುವರು.16ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಧಾರವಾಡ ವಿವಿಯ ಹಿಂದಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಚಂದುಲಾಲ್ ದುಬೆ ಅಧ್ಯಕ್ಷತೆ ವಹಿಸುವರು. ಬಹುಭಾಷಾ ತಜ್ಞ ಡಾ. ಪಂಚಾಕ್ಷರಿ ಹಿರೇಮಠ, ನಿವೃತ್ತ ಪ್ರಾಂಶುಪಾಲ ಡಾ.ವಿ.ವಿ. ಹೆಬ್ಬಳ್ಳಿ, ಧಾರವಾಡ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಆರ್.ಭಟ್ ಮುಂತಾದವರು ಅತಿಥಿಗಳಾಗಿರುವರು. ಒಟ್ಟು ಎಂಟು ಗೋಷ್ಠಿಗಳಲ್ಲಿ 180 ಮಂದಿ ವಿಷಯ ಮಂಡನೆ ಮಾಡುವರು.15ರಂದು ಸಂಜೆ ಕವಿಗೋಷ್ಠಿ ಕೂಡ ನಡೆಯಲಿದೆ ಎಂದು ಅವರು ವಿವರಿಸಿದರು.