ಇದನ್ನು ಉಲ್ಲಂಘಿಸುವವರಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಜತೆಗೆ ನಷ್ಟವಾದ ವಸ್ತುವಿನ ಬೆಲೆ ಮತ್ತು ₨ 50ಸಾವಿರ ದಂಡ
ವಿಧಿಸಬಹುದಾಗಿದೆ. ಇದನ್ನು ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡುವ ಅಧಿಕಾರ ಇದೆ. ಆದರೆ, ಇಂತಹ ಕಾನೂನು ಇದ್ದರೂ
ಅದರ ಅರಿವು ಇಲ್ಲದೆ ಆಸ್ಪತ್ರೆಗಳಿಗೆ ಹಾನಿ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವವನ್ನು ಸಂಘದ ಅಧ್ಯಕ್ಷೆ ಡಾ.ವಾಣಿ ಕೋರಿ, ಪದಾಧಿಕಾರಿಗಳಾದ ಡಾ.ಎಚ್.ವಿ.ಕೋಟ್ರೇಶ್, ಡಾ.ಕೆ.ಆರ್.ಶ್ರೀಧರ್, ಡಾ.ಪಿ.ನಾರಾಯಣ್, ಡಾ.ಅಮಿತ್ ಹೆಗ್ಡೆ ಮತ್ತಿತರರು ನೇತೃತ್ವ ವಹಿಸಿದ್ದರು.