ಬೆಂಗಳೂರು: ಹಾಲಿ ಚಾಂಪಿಯನ್ ತಮಿಳುನಾಡಿನ ವಿನೋದ್ ಶ್ರೀಧರ್ ಮತ್ತು ಮಹಾರಾಷ್ಟ್ರದ ಸೌರಭ್ ಪಾಟೀಲ್ ಸೋಮವಾರ ಆರಂಭವಾಗಲಿರುವ ಡಿ.ಎಸ್. ಮ್ಯಾಕ್ಸ್ ಎಐಟಿಎ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
ಈ ಟೂರ್ನಿಯು 3.5 ಲಕ್ಷ ರೂಪಾಯಿ ಬಹುಮಾನ ಒಳಗೊಂಡಿದೆ. ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್ನಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಭರವಸೆಯ ಆಟಗಾರ ಕರ್ನಾಟಕದ ಬಿ.ಆರ್. ನಿಕ್ಷೇಪ್ಗೆ ‘ವೈಲ್ಡ್ ಕಾರ್ಡ್’ ಲಭಿಸಿದೆ.