ಇತ್ತೀಚೆಗೆ ಕಳ್ಳರೆಂಬ ಗುಮಾನಿ ಮೇಲೆ ಅಪರಿ ಚಿತರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚುತ್ತಿದೆ. ಮಾನಸಿಕ ಅಸ್ವಸ್ಥರನ್ನು, ಬಾಯಿ ಬಾರದವರನ್ನು ಹೊಡೆದು ಕ್ಯಾಮೆರಾ ಮುಂದೆ ಮಿಂಚುವ ಜನರು ಹೆಚ್ಚುತ್ತಿದ್ದಾರೆ. ಕಾಡುಗಳ ಸಮೀಪ ವಾಸಿಸುವ ಜನರು ಹುಲಿ, ಚಿರತೆಗಳನ್ನು ಸೆರೆ ಹಿಡಿದು ಚಚ್ಚಿ ಸಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ.