ಈಚೆಗೆ ಹಲವರು ಗಣ್ಯಾತಿಗಣ್ಯರು ಸಾಲುಸಾಲಾಗಿ ಪರಪ್ಪನ ಅಗ್ರಹಾರಕ್ಕೆ ‘ಯಾತ್ರೆ’ ಕೈಗೊಳ್ಳುತ್ತಿದ್ದಾರೆ! ಯಾರು ಆ ಪುಣ್ಯಾತ್ಮ ಪರಪ್ಪ? ತನ್ನ ಹೆಸರು ಮುಂದೆ ಇಷ್ಟು ಪ್ರಸಿದ್ಧಿ ಗಳಿಸುತ್ತದೆ ಎಂದು ಅವನು ಬದುಕಿದ್ದಾಗ ಊಹಿಸಿಯೂ ಇರಲಿಕ್ಕಿಲ್ಲ!
ಅಂತೂ ಅಪರಾಧ ಮಾಡಿ ಸಿಕ್ಕಿಬಿದ್ದ– ಬೀಳದವರು ಎಷ್ಟೋ ಮಂದಿ- ‘ಇಹ ಲೋಕ ಸುಖಿ’ಗಳು ‘ಪರ’ಪ್ಪನ ಅಗ್ರಹಾರಕ್ಕೆ ತೆರಳಿ, ದುಃಖಿಗಳಾಗುತ್ತಾರೆ! ದೈವಗತಿ ವಿಚಿತ್ರವಲ್ಲವೆ?