ಭಾನುವಾರ ನಾಲ್ಕನೇ ಹಂತದ ಮತದಾನ ನಡೆಯುತ್ತಿರುವ 56 ವಿಧಾನಸಭಾ ಕ್ಷೇತ್ರಗಳಲ್ಲಿ ಹಲವಾರು ಘಟಾನುಘಟಿಗಳು ಸ್ಪರ್ಧಿಸಿದ್ದು, 32 ಜನ ಹಾಲಿ ಶಾಸಕರು, ಮೂವರು ಹಾಲಿ ಸಚಿವರು, 12 ಮಂದಿ ಮಾಜಿ ಸಚಿವರು, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಕಲ್ ರಾಜ್ ಮಿಶ್ರಾ ಮತ್ತು ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷ ರೀಟಾ ಬಹುಗುಣ ಜೋಷಿ ಅವರ ಹಣೆ ಬರಹ ನಿರ್ಧಾರ ಮತ ಪೆಟ್ಟಿಗೆ ಸೇರಲಿದೆ.