ಬೆಂಗಳೂರು: ಉಕ್ರೇನ್ ಅಧ್ಯಕ್ಷ ವಿಕ್ಟರ್ ಯನುಕೊವಿಚ್ ನೇತೃತ್ವದಲ್ಲಿ ಸಚಿವ ರನ್ನು ಒಳಗೊಂಡ 15 ಜನರ ನಿಯೋಗ ಮಂಗಳವಾರ ನಗರಕ್ಕೆ ಬಂದಿದ್ದು ಎರಡು ದಿನ ಇಲ್ಲಿ ತಂಗಲಿದೆ. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಹೆಚ್ಚುವರಿ ಮುಖ್ಯಕಾರ್ಯ ದರ್ಶಿ ಸುಭೀರ್ ಹರಿಸಿಂಗ್, ನಗರದ ಪೊಲೀಸ್ ಕಮೀಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ಮತ್ತಿತರ ಹಿರಿಯ ಅಧಿಕಾರಿಗಳು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಿಯೋಗವನ್ನು ಬರಮಾಡಿಕೊಂಡರು. ನಂತರ ನಿಯೋಗವು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಭೇಟಿ ಮಾಡಿತು.