ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಕನಸು ನನಸಾಯಿತೇ?

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಳಗಾವಿಯಲ್ಲಿ `ಸುವರ್ಣ ಸೌಧದ~ ಉದ್ಘಾಟನೆ ಯಾದ ಮರುದಿನ ಎಲ್ಲಾ ನಾಯಕರು (ರಾಜಕೀಯ) ಉತ್ತರ ಕರ್ನಾಟಕದವರ ಕನಸು ನನಸಾಯಿತೆಂದು ಬೊಗಳೆ ಬಿಟ್ಟಿದ್ದನ್ನು ಪತ್ರಿಕೆಗಳಲ್ಲಿ ನೋಡಿದ್ದೇವೆ. ನಿಜಕ್ಕೂ ಉತ್ತರದ ಕನ್ನಡಿಗರು ಈ ಭವ್ಯ ಸುವರ್ಣ ಸೌಧದ ಕನಸು ಕಂಡಿದ್ದರೆ? ಇಲ್ಲ. ಅವರು ಕಂಡಿದ್ದು ಪ್ರವಾಹದಲ್ಲಿ ಕೊಚ್ಚಿ ಹೋದ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕನಸು.
 
2009ರಲ್ಲಿ ಬಂದ ಪ್ರವಾಹದಿಂದ ಮನೆ - ಮಠಗಳನ್ನು ಕಳೆದುಕೊಂಡು ಸಂತ್ರಸ್ತರಾದ ಜನರ ಬದುಕನ್ನು ಕಟ್ಟದ ಸರ್ಕಾರ `ಸುವರ್ಣ ಸೌಧ~ ಕಟ್ಟಿದ್ದು ಯಾವ ಪುರುಷಾರ್ಥಕ್ಕೆ?  400 ಕೋಟಿ ರೂಪಾಯಿ ಕಟ್ಟಡಕ್ಕೆ ಮತ್ತು ಅದರ ಉದ್ಘಾಟನೆ ಸಮಾರಂಭಕ್ಕೆಂದು 16 ಕೋಟಿ ರೂಪಾಯಿ ಖರ್ಚು ಮಾಡುವ ಔಚಿತ್ಯವಾದರೂ ಏನಿತ್ತು? ಅದೇ 400 ಕೋಟಿ ರೂಪಾಯಿಯಲ್ಲಿ 40000 ಮನೆಗಳನ್ನು ಸಂತ್ರಸ್ತರಿಗೆ ನಿರ್ಮಿಸಬಹುದಿತ್ತು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT