ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ: ದ.ಆಫ್ರಿಕಾ ಭಾರತೀಯರ ನೆರವು

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಜೋಹಾನ್ಸ್ ಬರ್ಗ್(ಪಿಟಿಐ):  ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಭಾರತ ಮೂಲದವರು ದಕ್ಷಿಣ ಆಫ್ರಿಕಾದಲ್ಲಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಇಲ್ಲಿನ ಸ್ಥಳೀಯ ಅಭಿವೃದ್ಧಿ ಸಂಘಟನೆ `ಆತ್ಮದಾನ್' ಮತ್ತು `ಜೋಹಾನ್ಸ್ ಬರ್ಗ್‌ನ ಯುವಕ ಮಂಡಳ' ಸಂಘಟನೆಗಳು ಜಂಟಿಯಾಗಿ ದೇಣಿಗೆ ಸಂಗ್ರಹ ಕಾರ್ಯಕ್ರಮ ನಡೆಸುತ್ತಿವೆ. ಹಾಗೆಯೇ ಬಾಪ್ಸ್ ಚಾರಿಟಿ ಸಂಸ್ಥೆಯು ರಾಷ್ಟ್ರೀಯ ವಿಪತ್ತು ನಿಧಿಯನ್ನು ನೀಡಲು ಸಜ್ಜಾಗಿದೆ.

`ಉತ್ತರಾಖಂಡದ ಸಂತ್ರಸ್ತರಿಗೆ ಮನಃ ಪೂರ್ವಕವಾಗಿ ಧನಸಹಾಯ ನೀಡು ವಂತೆ ದಕ್ಷಿಣ ಆಫ್ರಿಕಾದ ಜನರಲ್ಲಿ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ಘಟನೆಗೂ ಮುಂಚೆ ಭಾರತದಲ್ಲಿ ಸುನಾಮಿ ಮತ್ತು ಭೂಕಂಪನವಾಗಿದ್ದಾಗಲೂ ನಾವು ಪರಿಹಾರಕ್ಕಾಗಿ ನಿಧಿ ಸಂಗ್ರಹಿಸಿದ್ದೆವು' ಎಂದು ಆತ್ಮದಾನ್ ಸಂಘಟನೆ ವಕ್ತಾರ ಈಶ್ವರ್‌ಲಾಲ್ ಗೋವನ್ ತಿಳಿಸಿದರು. ಭಾರತ ಮೂಲದ ಸಂಘಟನೆಗಳ ಈ ಕೆಲಸವನ್ನು ದಕ್ಷಿಣ ಆಫ್ರಿಕಾದಲ್ಲಿನ ಭಾರತದ ಹೈಕಮಿಷನರ್ ವೀರೇಂದ್ರ ಗುಪ್ತ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT