`ಅರಣ್ಯ ರಕ್ಷಣೆ ನಾವೇ ಮಾಡುತ್ತೇವೆ~ ಎಂದು ಹೇಳಿರುವ ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಬೇಕು.
ಒಂದು ಕಾಲದಲ್ಲಿ ನಾಲ್ಕೈದು ಎಕರೆ ಕಾಫಿ ತೋಟ ಹೊಂದಿದವರು ಈಗ ನೂರಾರು ಎಕರೆ ತೋಟಗಳ ಒಡೆಯರಾಗಲು ಹೇಗೆ ಸಾಧ್ಯವಾಯಿತು? ಜಿಲ್ಲೆಯಲ್ಲಿರುವ ಗೋಮಾಳ, ಸ್ಮಶಾನವೆನ್ನುವ ವ್ಯತ್ಯಾಸ ಇಲ್ಲದೆ ಸರ್ಕಾರಿ ಜಮೀನೆಲ್ಲ ಎಲ್ಲಿ ಹೋಯಿತು?
ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸುವುದನ್ನು ವಿರೋಧಿಸುತ್ತಿರುವ ಉದ್ದೇಶ ಅರಣ್ಯವನ್ನು ಕಬಳಿಸಿ ಇನ್ನಷ್ಟು ತೋಟ, ರೆಸಾರ್ಟ್, ಹೋಮ್ ಸ್ಟೇಗಳನ್ನು ಮಾಡುವುದೇ ಆಗಿದೆ.