ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಭಾನುವಾರ ಮುಂಜಾನೆಯೇ ನಗರದ ವಿವಿಧ ಬಡಾವಣೆಗಳ ಉದ್ಯಾನಗಳಿಗೆ ಭೇಟಿ ನೀಡಿ ವಾಯುವಿಹಾರಿಗಳ ಬೆಂಬಲ ಕೋರಿದರು.
ವಿಜಯನಗರ, ಈಜುಕೊಳ ಬಡವಾಣೆ, ಆರ್.ಪಿ.ಸಿ. ಬಡಾವಣೆ, ಸುಬ್ಬಣ್ಣ ಗಾರ್ಡನ್, ಬಾಪೂಜಿ ಬಡವಾಣೆ ಮತ್ತು ಸುತ್ತಮುತ್ತಲಿನ ವಿವಿಧ ಉದ್ಯಾನಗಳಲ್ಲಿ ಸುತ್ತಾಡಿದರು. ಬಿಜೆಪಿ ಮುಖಂಡ ವಿ. ಸೋಮಣ್ಣ, ಪಾಲಿಕೆ ಸದಸ್ಯ ಗಂಗಬೈರಯ್ಯ ಜತೆಗಿದ್ದರು.
ಬೆಳಿಗ್ಗೆ ಯಡಿಯೂರು ಮತ್ತು ಸೌತ್ ಎಂಡ್ ಸರ್ಕಲ್ನಿಂದ ತೆರೆದ ವಾಹನದಲ್ಲಿ ಪ್ರಚಾರ ಆರಂಭಿಸಿದರು. ನಂತರ ಪದ್ಮನಾಭನಗರ ವಾರ್ಡ್ ವ್ಯಾಪ್ತಿಯ ತ್ಯಾಗರಾಜನಗರ, ಹೊಸಕೆರೆಹಳ್ಳಿ, ಕುಮಾರಸ್ವಾಮಿ ಬಡಾವಣೆ, ಚಿಕ್ಕಲಸಂದ್ರ, ಗಣೇಶ ಮಂದಿರ, ಬನಶಂಕರಿ, ತಣಿಸಂದ್ರ ವಾರ್ಡ್ಗಳಲ್ಲಿ ಪ್ರಚಾರ ಮುಂದುವರಿಸಿದರು. ನಟ ಗಣೇಶ್ ಮತ್ತು ಪತ್ನಿ ಶಿಲ್ಪಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಗಣೇಶ್ ಮಾತನಾಡಿ, ‘ನಾನು ಪಕ್ಷ ನೋಡಿ ಪ್ರಚಾರಕ್ಕೆ ಬರಲಿಲ್ಲ. ಅನಂತಕುಮಾರ್ ಮತ್ತು ಮೋದಿ ಅವರಿಗಾಗಿ ಬಂದಿದ್ದೇನೆ. ಕೇಂದ್ರದಲ್ಲಿ ದಕ್ಷ ಆಡಳಿತ ಬೇಕಾಗಿದೆ’ ಎಂದು ಹೇಳಿದರು.
ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ, ಪಕ್ಷದ ಇತರೆ ಮುಖಂಡರಾದ ಡಾ. ಎಂ.ಆರ್.ವಿ. ಪ್ರಸಾದ್, ಲಕ್ಷ್ಮೀಕಾಂತ್, ವೆಂಕಟೇಶ ನಾಯ್ಡು, ಗೋವಿಂದರಾಜು, ಎಲ್.ಆರ್. ರಮೇಶ್, ಬಸವರಾಜು, ಸುರೇಶ್ ಮತ್ತಿತರರು ಭಾಗಿಯಾಗಿದ್ದರು.
ಸಂಜೆ ದೀಪಾಂಜಲಿನಗರದಲ್ಲಿ ಗಣೇಶ ದೇವಸ್ಥಾನ ಸಮೀಪದಿಂದ ಎಫ್ಸಿಐ ಬಡಾವಣೆ, ಚಂದ್ರಾ ಲೇಔಟ್, ನಾಗರಬಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಪಕ್ಷದ ನಾಯಕರಾದ ಅಶ್ವತ್ಥನಾರಾಯಣ, ಆನಂದ್, ವಾಗೀಶ್, ಮೋಹನ್ಕುಮಾರ್, ಉಮೇಶ್ ಶೆಟ್ಟಿ, ಆಶದ್ ಪಾಷಾ, ಗೋವಿಂದ ಮಾಲಿ, ತೇಜಸ್ವಿ ಸೂರ್ಯ, ಸಪ್ತಗಿರಿ ಗೌಡ, ವಿಶ್ವನಾಥಗೌಡ ಇತರರು ಪಾಲ್ಗೊಂಡಿದ್ದರು.