ರಂಗೋಲಿ ಕಲಾಕೇಂದ್ರದ ಕ್ಯೂರೇಟರ್ ಸುರೇಖಾ ಮಾತನಾಡಿ, `ಇದು ಸ್ನೇಹ ಹಂದರ (ಫ್ರೆಂಡ್ಶಿಪ್ ಪಾಯಿಂಟ್)ನಲ್ಲಿ ಆಯೋಜಿಸುತ್ತಿರುವ ಮೊದಲ ಕಾರ್ಯಕ್ರಮ.ಉದ್ಯಾನನಗರಿ ಸ್ನೇಹ, ಪ್ರೀತಿಗೆ ಹೆಸರುವಾಸಿ. ನಗರದ ಜನರು ಸ್ನೇಹ ಅರಳಿಸುವ ಕಾರ್ಯಕ್ಕೆ ಸ್ನೇಹ ಹಂದರವನ್ನು ಬಳಸಿಕೊಳ್ಳಬಹುದು. ಇಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು' ಎಂದರು.
ಉದಯೋನ್ಮುಖ ಕವಿಗಳಾದ ರಶ್ಮಿ ಕೆ.ಎಂ., ಬಸವರಾಜು ಕೆ.ಆರ್, ದೀಪಾ ವೈ, ದೀಪು ರಾವ್, ಕುಮಾರ ಇಂದ್ರಬೆಟ್ಟ, ಎಚ್.ಲಕ್ಷ್ಮಿನಾರಾಯಣಸ್ವಾಮಿ, ಚನ್ನಬಸಪ್ಪ ಸೇರಿದಂತೆ 25 ಕವಿಗಳು ಕವನಗಳನ್ನು ವಾಚಿಸಿದರು. ನಾಡಿನ ಹಿರಿಯ ಕವಿಗಳ ಕವನಗಳನ್ನು ಓದಿದ ಬಳಿಕ ತಮ್ಮಕವನಗಳನ್ನು ವಾಚಿಸಿದರು.