ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ನೇಮಕ: ಆಶಾಕಿರಣ

Last Updated 8 ಸೆಪ್ಟೆಂಬರ್ 2013, 19:49 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ಪದವಿ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿರುವುದು ಸ್ವಾಗತಾರ್ಹ ಬೆಳವಣಿಗೆ. ಪದವಿ ಕಾಲೇಜು ಉಪನ್ಯಾಸಕರಂತಹ ಅತ್ಯುನ್ನತ ಹುದ್ದೆಗಳು ಕೆ.ಪಿ.ಎಸ್.ಸಿ.ಯ ಭ್ರಷ್ಟಾಚಾರಪೂರಿತ ನೇಮಕಾತಿಯಿಂದ ನಮ್ಮಂತಹ ಸಾಮಾನ್ಯ ವರ್ಗದವರಿಗೆ ಗಗನಕುಸುಮವಾಗಿದ್ದವು.

ಈಗ ಆರ್.ವಿ. ದೇಶಪಾಂಡೆಯವರ ಹೇಳಿಕೆ ನಮ್ಮಂತಹ ಅನೇಕ ಸ್ನಾತಕೋತ್ತರ ಪದವೀಧರರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಈ ನಿರ್ಧಾರದಿಂದ ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು.
-ಧನಂಜಯಮೂರ್ತಿ ಜಿ.ಎನ್., ಕೆ. ಗೊಲ್ಲರಹಳ್ಳಿ, ಕಡೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT