ಬೆಂಗಳೂರು: `ಮೌಲ್ಯಾಧಾರಿತ ಶಿಕ್ಷ ಣಕ್ಕೆ ಒತ್ತು ನೀಡದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ~ ಎಂದು ದೆಹಲಿ ವೆುಟ್ರೊ ರೈಲು ನಿಗಮದ ಎಂ.ಡಿ ಡಾ.ಇ.ಶ್ರೀಧರನ್ ಗುರುವಾರ ಅಭಿಪ್ರಾಯಪಟ್ಟರು.
ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ಎಂ.ಎಸ್. ರಾಮಯ್ಯ ತಾಂತ್ರಿಕ ಕಾಲೇಜಿನ ಅಧ್ಯಕ್ಷ ಡಾ.ಎಂ.ಆರ್. ಜಯರಾಂ, ಉಪಾಧ್ಯಕ್ಷ ಎಂ.ಆರ್. ಸೀತಾರಾಂ, ಗೋಕುಲ ಶಿಕ್ಷಣ ಪ್ರತಿಷ್ಠಾನದ ಸಿಇಓ ಎಸ್.ಎಂ. ಆಚಾರ್ಯ, ಸಲಹೆಗಾರ ಡಾ.ಕೆ. ರಜನಿಕಾಂತ್, ಕಾಲೇಜಿನ ಪ್ರಿನ್ಸಿಪಾಲ್ ಡಾ.ಕೆ. ರಾಜಾನಂದಮ್ ಪಾಲ್ಗೊಂಡಿದ್ದರು.