ಐಎಫ್ಐಎಂ ಬಿಸಿನೆಸ್ ಸ್ಕೂಲ್ನ 15ನೇ ವಾರ್ಷಿಕ ಘಟಿಕೋತ್ಸವ, ಎಲೆಕ್ಟ್ರಾನಿಕ್ ಸಿಟಿಯ ಕಾಲೇಜು ಕ್ಯಾಂಪಸ್ನಲ್ಲಿ ನಡೆಯಿತು. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಕುಲಪತಿ ವಿ ಎನ್ ರಾಜಶೇಖರನ್ ಪಿಳ್ಳೆ ಘಟಿಕೋತ್ಸವ ಭಾಷಣ ಮಾಡಿದರು.
ಟೈಟನ್ ಇಂಡಸ್ಟ್ರೀಸ್ ಎಂಡಿ ಭಾಸ್ಕರ್ ಭಟ್, ಕೃಷ್ಣಾ ಆಂಟಿ ಆಕ್ಸಿಡೆಂಟ್ಸ್ ಅಧ್ಯಕ್ಷ ಸುಧೀರ್ ಕಾಂತ್, ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಜರ್ನಲ್ನ ಮುಖ್ಯ ಸಂಪಾದಕ ವಿ. ಬಿ ಪಡೋದೆ, ಕಾಲೇಜಿನ ನಿರ್ದೇಶಕ ಪ್ರೊ. ಬಿ. ಬಿ ಪೇಥಿಯಾ, ಸಿಡಿಇ ಕಾರ್ಯದರ್ಶಿ ಸಂಜಯ್ ಪಡೋದೆ ಅತಿಥಿಯಾಗಿದ್ದರು.
205 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಐಎಫ್ಐಎಂ ಬಿಸಿನೆಸ್ ಸ್ಕೂಲ್ನಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಕೇಂದ್ರ ಆರಂಭಿಸಲಾಯಿತು. ಇದೇ ಸಂದರ್ಭದಲ್ಲಿ ವಿ. ಬಿ. ಪಡೋದೆ ಪ್ರತಿಷ್ಠಾನದ ಮೂಲಕ ವಿದ್ಯಾರ್ಥಿನಿಯರಿಗೆ 1 ಲಕ್ಷ ರೂ ಮೊತ್ತದ ಹೊಸ ಸ್ಕಾಲರ್ಶಿಪ್ ಯೋಜನೆಗೆ ಚಾಲನೆ ನೀಡಲಾಯಿತು.