ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಲಾದ ಆಪ್ಟಿಕಲ್ ಫೈಬರ್ ಕೇಬಲ್ಗಳ (ಒಎಫ್ಸಿ) ಕುರಿತು ಪರಿಶೀಲನೆ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಯಡಿಯೂರು ವಾರ್ಡ್ ಸದಸ್ಯ ಎನ್.ಆರ್. ರಮೇಶ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.
ಎಸ್. ಹರೀಶ್, ಸಿ.ಕೆ. ರಾಮಮೂರ್ತಿ, ಲತಾ ನರಸಿಂಹಮೂರ್ತಿ, ಎನ್.ಜಿ. ಕೃಷ್ಣರೆಡ್ಡಿ, ಆರ್.ಎಸ್. ಸತ್ಯನಾರಾಯಣ, ಮುರುಗೇಶ ಮೊದಲಿಯಾರ್, ಕೆ. ಪ್ರಕಾಶ್ ಮತ್ತು ಮುಖ್ಯ ಎಂಜಿನಿಯರ್ (ವಿಚಕ್ಷಣ) ಎಸ್. ಪ್ರಭಾಕರ್ ಸಮಿತಿ ಸದಸ್ಯರಾಗಿದ್ದಾರೆ.
ಆಪ್ಟಿಕಲ್ ಫೈಬರ್ ಕೇಬಲ್ನ ಉದ್ದ, ವಿಧಿಸಬೇಕಾದ ಭೂಬಾಡಿಗೆ ಮೊದಲಾದ ವಿಷಯಗಳ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿದೆ.