ಶಿವಮೊಗ್ಗ-ಮೈಸೂರು ಇಂಟರ್ಸಿಟಿ ರೈಲು ಪ್ರಾರಂಭ ಆಗಿರುವುದು ಎರಡೂ ಜಿಲ್ಲೆಗಳ ಹಾಗೂ ಹಾಸನ ಚಿಕ್ಕಮಗಳೂರು ಜಿಲ್ಲೆಗಳ ಜನತೆಗೆ ಅತ್ಯಂತ ಸಂತಸದ ವಿಷಯ.ಆದರೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ರೈಲು ನಿಲ್ದಾಣದಲ್ಲಿ ನಿಲುಗಡೆ ಇಲ್ಲದಿರುವುದು ಅತ್ಯಂತ ವಿಷಾದನೀಯ.ಆದ್ದರಿಂದ ರೈಲ್ವೆ ಇಲಾಖೆ ಕಡೂರಿನಿಂದ ಜನರು ಹೆಚ್ಚಾಗಿ ಪ್ರಯಾಣ ಮಾಡುವುದನ್ನು ಗಮನಿಸಿ ರೈಲು ನಿಲುಗಡೆ ವ್ಯವಸ್ಥೆ ಮಾಡಬೇಕೆಂದು ಕೋರುತ್ತೇನೆ.