ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಪಕ್ಕೆ ಹಾಜರಾದ ರಾಜಾ

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜೈಲಿನಿಂದ ಬಿಡುಗಡೆಯಾಗಿರುವ 2ಜಿ ತರಂಗಾಂತರ ಹಗರಣದ ಪ್ರಮುಖ ಆರೋಪಿ, ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರು ಬುಧವಾರ ಸಂಸತ್ ಕಲಾಪಕ್ಕೆ ಹಾಜರಾದರು.

ರಾಜಾ  ಕಾರಿನಿಂದ ಇಳಿದು ನೇರವಾಗಿ ಲೋಕಸಭೆಗೆ ತೆರಳಿದ ಸಮಯದಲ್ಲಿ ಮಾಧ್ಯಮದವರು ಪೈಪೋಟಿ ಮೇಲೆ ಕ್ಯಾಮೆರಾ ಕ್ಲಿಕ್ಕಿಸಿದರು.

ಪ್ರತಿಕ್ರಿಯೆಗೆ ಕಾಯುತ್ತಿದ್ದ ಮಾಧ್ಯಮದವರನ್ನು  ಅವರು ಮಾತನಾಡಿಸಲಿಲ್ಲ. ಮಧ್ಯಾಹ್ನ ಶೂನ್ಯವೇಳೆ ಬಳಿಕ ಕಲಾಪಕ್ಕೆ ಹಾಜರಾದ ರಾಜಾ, ಕೆಲವು ಸದಸ್ಯರೊಂದಿಗೆ ಸಂತಸ ಹಂಚಿಕೊಂಡರು. ಡಿಎಂಕೆ ಕೆಲ ಸದಸ್ಯರೊಂದಿಗೆ ಕೊನೆ ಸಾಲಿನಲ್ಲಿ  ಕುಳಿತಿದ್ದ ರಾಜಾ, ಕೆಲ ಹೊತ್ತಿನಲ್ಲಿಯೇ ಸಂಸತ್‌ನಿಂದ ತೆರಳಿದರು.

ತಮಿಳುನಾಡಿನ ನೀಲಗಿರಿ ಕ್ಷೇತ್ರದ ಡಿಎಂಕೆ ಸಂಸದರಾಗಿರುವ ರಾಜಾ, 30 ಸಾವಿರ ಕೋಟಿ ರೂಪಾಯಿಗಳ 2ಜಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದರು. 

ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದ ಬಳಿಕ ಹೊರ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT