ಕೃಷ್ಣರಾಜಪುರ: ವಿವಿಧ ಕಲಿಕಾ ಮೇಳಗಳಲ್ಲಿ ತೊಡಗಿಸುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆ, ಆಸಕ್ತಿಯ ಕ್ಷೇತ್ರಗಳನ್ನು ಸುಲಭವಾಗಿ ಗುರುತಿಸಬಹುದು ಎಂದು ಲಿಟ್ಲ್ ಗ್ಲೂಮ್ ಶಾಲೆಯ ಕಾರ್ಯದರ್ಶಿ ಸರಸ್ವತಿ ಅಭಿಪ್ರಾಯಪಟ್ಟರು.
ಸಮೀಪದ ದೇವಸಂದ್ರದ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶಾಲೆ ವತಿಯಿಂದ ಆಯೋಜಿಸಿದ್ದ ಬಾಲ ಮೇಳ- ಕಲಿಕಾ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆಯ `ಮಾಡುತ್ತಾ ಕಲಿ~ ಎನ್ನುವ ತತ್ವದ ಆಧಾರದ ಮೇಲೆ ನಡೆಯುವ ಬಾಲ ಮೇಳಗಳಲ್ಲಿ ಪೋಷಕರನ್ನು ಸಹಾ ತೊಡಗಿಸಬೇಕು ಎಂದು ಅವರು ಹೇಳಿದರು.
ಇಂಡೋ- ಅಮೇರಿಕನ್ ಸಂಸ್ಥೆಯ ಲಲಿತ ಪ್ರಸಾದ್, ಸಾಮಾಜಿಕ ಕಾರ್ಯಕರ್ತ ಸುಧಾಕರ್, ಲೋಕೇಶ್, ಮುಖ್ಯ ಶಿಕ್ಷಕಿ ಮಂಜುಳಾ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತ ರಿದ್ದರು. ಮೇಳದಲ್ಲಿ ವಿವಿಧ 55 ಕಲಿಕಾ ಮಳಿಗೆಗಳನ್ನು ತೆರೆಯಲಾಗಿತ್ತು.