ಆಜ್ಞೆ ಮಾಡುವ ರಾಮ
ಕೈಕತ್ತರಿಸುವ ದ್ರೋಣ
ಇನ್ನೂ ಇರುವುದರಿಂದ
ಶಂಭೂಕ ಏಕಲವ್ಯರಿಗೆ ಕೊರತೆಯಿಲ್ಲ.
ವಿಚಿತ್ರವೆಂದರೆ ಈ ಮಧ್ಯೆ
ನಾಡಿಗೆ ಹೊರಟ ಏಕಲವ್ಯರು
ಇದ್ದಕ್ಕಿದ್ದಂತೆ ಕಳೆದುಹೋಗಿದ್ದಾರೆ
ಜುಟ್ಟ ಬಿಗಿದು ಬಿಲ್ಲುಬಾಣಗಳ ಹೆಗಲಿಗೇರಿಸಿ
ಹುಲಿಯ ಬೆನ್ನೇರಿದ ಗುಂಪು
ಹಾದಿ ಉದ್ದಕ್ಕೂ ಹೆಜ್ಜೆ ಮೂಡಿಸಿದವರು
ಎಡಕ್ಕೆ ತಿರುಗಿದರೋ
ಬಲಕ್ಕೆ ಹೊರಳಿದರೋ
ಒಡೆದು ಹೋಗಿದ್ದಾರೆ ಅವರೆಲ್ಲೋ