`ಯೋಗೇಶ್ ಠಾಣೆಯ ಮುಂಭಾಗ ಇರುವಾಗಲೇ ಲೋಕೇಶಪ್ಪ `ಊರಿಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇನೆ~ ಎಂದು ಮತ್ತೆ ಬೆದರಿಕೆ ಒಡ್ಡಿದ್ದರು. ಗ್ರಾಮಕ್ಕೆ ವಾಪಸ್ಸಾದ ಯೋಗೇಶ್ ಜೀವಭಯದಿಂದ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದಾಗ ಅಕ್ಕಪಕ್ಕದವರು ನೋಡಿ, 108 ವಾಹನಕ್ಕೆ ಕರೆ ಮಾಡಿದ್ದಾರೆ. ವಾಹನ ಬಂದಾಗ ಲೋಕೇಶಪ್ಪ ಮತ್ತು ವೀರಭದ್ರಪ್ಪ ತಡೆಯೊಡ್ಡಿ, ಚಿಕಿತ್ಸೆಗೆ ಅಸಹಕಾರ ನೀಡಿದ್ದಾರೆ. ಆಗ ಗ್ರಾಮಸ್ಥರು ಚನ್ನಗಿರಿ ಆಸ್ಪತ್ರೆಯಲ್ಲಿ ಯೋಗೇಶ್ಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ~ ಎಂದು ಯೋಗೇಶ್ ಅವರ ಮಗ ಸಿ.ವೈ. ಕಾರ್ತೀಕ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.