ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಮುಘಲ್ ಕಾರು ರ್ಯಾಲಿಯ ಕೊನೆಯ ಹಂತದ ರೇಸ್ ವೇಳೆ ಆಳವಾದ ಪ್ರಪಾತಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ನೇವಿಗೇಟರ್ ಆಶಿಶ್ ಮಹಾಜನ್ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಅನಂತನಾಗ್ ಇಲ್ಲೆಯ ಸಿಮ್ತಾನ್ ಬಳಿ ಭಾನುವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಬೆಂಗಳೂರು ಮೂಲದ ಚಾಲಕ ಜಿತೇಂದ್ರ ಶುಕ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರಿದ್ದ ಜಿಪ್ಸಿ10 ಸಾವಿರ ಆಳದ ಪ್ರಪಾತಕ್ಕೆ ಬ್ದ್ದಿದಿತ್ತು. ಜಿತೇಂದ್ರ ಅವರಿಗೆ ಆಶಿಶ್ ನೇವಿಗೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಗಾಯಗೊಂಡಿದ್ದ ಮಹಾಜನ್ ಅವರನ್ನು ಸಿಆರ್ಪಿಎಫ್ ಸಿಬ್ಬಂದಿ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ದಾಖಲಿಸಲಾಗಿದ್ದರು.