ಕಾರ್ಕಳ: ಬಡತನದಿಂದ ಬಳಲುತ್ತಿರುವ ಬಡರೋಗಿಗಳ ಚಿಕಿತ್ಸೆ ವೆಚ್ಚಕ್ಕೆ ಸಂಬಂಧಿಸಿದಂತೆ ಶಾಸಕ ವಿ.ಸುನಿಲ್ ಕುಮಾರ್ ಶಿಫಾರಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಕಳ ವಿಧಾನಸಭಾ ಕ್ಷೇತ್ರದ 17 ಬಡ ರೋಗಿಗಳಿಗೆ ಪರಿಹಾರ ನಿಧಿಯಿಂದ ಪರಿಹಾರಧನ ಬಿಡುಗಡೆ ಮಾಡಿದ್ದಾರೆ.
ಫಲಾನುಭವಿಗಳ ವಿವರ: ತಾಲ್ಲೂಕಿನ ನೆಲ್ಲಿಕಾರು ಗ್ರಾಮದ ಸುಧಾಕರ ಪೂಜಾರಿ- ರೂ 8ಸಾವಿರ, ಕುಚ್ಚೂರು ಗ್ರಾಮದ ಹುತ್ತಬೈಲು ರಘುರಾಮ ಶೆಟ್ಟಿ -ರೂ 10ಸಾವಿರ, ಕುಕ್ಕುಂದೂರು ಬಂಗ್ಲೆಗುಡ್ಡೆಯ ಹಿಮ್ಮುಂಜೆ ರಸ್ತೆ ನಿವಾಸಿ ಅಪ್ಸಾ- ರೂ 5 ಸಾವಿರ, ತಾಲ್ಲೂಕಿನ ಇರ್ವತ್ತೂರು ಸುಜಾತಾ ಪೂಜಾರಿ -ರೂ 50ಸಾವಿರ, ಕಾಂತಾವರ ಗ್ರಾಮದ ಬೋಲ್ಜಾಲ್ ದರ್ಖಾಸು ಮನೆಯ ಭೋಜ ಪೂಜಾರಿ- ರೂ 10ಸಾವಿರ, ವರಂಗ ಗ್ರಾಮದ ಬಂಡೀಮಠ ಮಾಧವ ಆಚಾರ್ಯ -ರೂ 20ಸಾವಿರ, ಪಳ್ಳಿ ಗ್ರಾಮದ ತಾಂಜಮನೆ ನಿವಾಸಿ ಮರಿಯಣ್ಣ ಮೆಂಡೋನ್ಸಾ -ರೂ 35ಸಾವಿರ, ಮರ್ಣೆ ಗ್ರಾಮದ ಎಣ್ಣೆಹೊಳೆಯ ಜೈನುಲ್ ಅಭಿದ್ -ರೂ 35ಸಾವಿರ, ನಲ್ಲೂರು ಗ್ರಾಮದ ಪೆರಿಬೆಟ್ಟು ಮನೆಯ ಸುಂದರ ಶೇರ್ವೆಗಾರ್- ರೂ 15ಸಾವಿರ, ದುರ್ಗಾ ಗ್ರಾಮದ ತೆಳ್ಳಾರು ಮರ್ಜಾಲು ಮನೆಯ ಕುಟ್ಟಿ ಪೂಜಾರಿ -ರೂ 4ಸಾವಿರ, ನಿಟ್ಟೆ ಗ್ರಾಮದ ಚೇತನಹಳ್ಳಿಯ ಸುಧಾಕರ- ರೂ 5ಸಾವಿರ, ಬೇಳಂಜೆ ಗ್ರಾಮದ ಹಣೆಗೋಡು ಮನೆಯ ಶಿವರಾಮ ನಾಯ್ಕ- ರೂ 15ಸಾವಿರ, ಕುಕ್ಕುಂದೂರು ಗ್ರಾಮದ ಜಗದಾಂಬ ನಿಲಯದ ಜಗನ್ನಾಥ ಪೂಜಾರಿ- ರೂ 15ಸಾವಿರ ಮಂಜೂರಾಗಿದೆ ಎಂದು ಪ್ರಕಟಣೆ ತಿಳಿಸಿದೆ.