ಸರ್ಕಾರದಿಂದ ಇನ್ನೂ ಹೆಚ್ಚಿನ ಹಣ ಬರಲಿ, ಅದನ್ನು ಕೋಟೆಯ ಹಾಗೂ ಊರಿನ ಅಭಿವೃದ್ಧಿಗೆ ತೊಡಗಿಸಿದರೆ ಉತ್ತಮ ಅಲ್ಲವೇ? ಉತ್ಸವ ನೋಡಲು ದೂರ-ದೂರದಿಂದ ಬಂದ ಜನರು ಅದೇ ಭಗ್ನ ಕೋಟೆಯನ್ನು ನೋಡಿ `ಈ ಕೋಟೆಯನ್ನು ಆಂಗ್ಲರು ಹಾಳು ಮಾಡಿದ್ದಾರೆ, ಕೋಟೆಯೊಳಗಿನ ಸಂಪತ್ತನ್ನೆಲ್ಲ ಲೂಟಿ ಮಾಡಿದ್ದಾರೆ~. ಎಂದು ಮಾತನಾಡಿಕೊಳ್ಳುವುದು ಸಾಮಾನ್ಯ. ಅಂದರೆ ನಾವು ಈ ಹಾಳಾದ ಕೋಟೆಯನ್ನು ಪ್ರದರ್ಶಿಸಿ ಆಂಗ್ಲರ ಶೂರತನವನ್ನೇ ಪ್ರಚಾರ ಮಾಡುತ್ತಿದ್ದೆೀವೆ ಎನಿಸುತ್ತಿದೆ. ಎಷ್ಟು ದಿನ ಹೀಗೆಯೇ ಮಾಡುವುದು? ಹೊರರಾಜ್ಯಗಳಿಂದ ಗಾಯಕರು ಹಾಗೂ ಕಲಾತಂಡಗಳನ್ನು ತರಿಸಿ ಅವರಿಗೆ ಲಕ್ಷಾಂತರ ಹಣ ಖರ್ಚು ಮಾಡಿ ಉತ್ಸವಕ್ಕೆ ಸಂಬಂಧವೇ ಇಲ್ಲದ ಹಾಡು ಹಾಡಿಸಿ ಕೇಳಿ ಕುಣಿದು ಕುಪ್ಪಳಿಸುತ್ತೇವೆ. ನಮ್ಮ ನಾಡಿನಲ್ಲೇ ಸಾಕಷ್ಟು ಜನಪದ ಕಲೆಗಳು, ಕಲಾಕಾರರೂ ಇರುವಾಗ ಈ ದುಂದುವೆಚ್ಚವೇಕೆ? ಇದೇ ಹಣದಿಂದ ಕೋಟೆಯನ್ನು ಅಂದವಾಗಿಸುವ ಯೋಜನೆ ರೂಪಿಸಿದರೆ ಅಂದಿನ ಕೋಟೆ ವೈಭವವನ್ನು ಇವತ್ತು ಕಣ್ಣಾರೆ ನೋಡಬಹುದಲ್ಲವೆ?