ನವದೆಹಲಿ, ಸೆ. 19– ಪಾರ್ಲಿಮೆಂಟ್ ಸದಸ್ಯ ಶ್ರೀ ಎಚ್. ಸಿ. ದಾಸಪ್ಪನವರನ್ನು ಕೇಂದ್ರ ಸರ್ಕಾರದ ಸಂಪುಟದ ಸಚಿವರನ್ನಾಗಿ ನೇಮಿಸಲಾಗಿದೆಯೆಂದೂ ಅವರಿಗೆ ರೈಲ್ವೆ ಶಾಖೆಯನ್ನು ನೀಡಲಾಗಿದೆಯೆಂದೂ ಇಂದು ಸಂಜೆ ರಾಷ್ಟ್ರಪತಿ ಭವನದಿಂದ ಹೊರಬಿದ್ದ ಪ್ರಕಟಣೆ ತಿಳಿಸಿದೆ.
ಶ್ರೀ ದಾಸಪ್ಪನವರನ್ನು ಸಂಪುಟದ ಸಚಿವರನ್ನಾಗಿ ನೇಮಿಸಿರುವುದರಿಂದ ನೆಹರೂ ಸಂಪುಟದಲ್ಲಿ ಸಚಿವರ ಸಂಖ್ಯೆ ಹತ್ತಕ್ಕೇರಿದೆ.