ರಾಜ್ಯದ ರಾಜಕೀಯ ಪ್ರಮುಖರಾದ ಕೇಶುಭಾಯಿ ಪಟೇಲ್, ಅರ್ಜುನ್ಮೋಧ್ವಾಡಿಯಾ, ಆರ್.ಸಿ. ಫಲ್ದು ಅವರ ಭವಿಷ್ಯ ಮತಪೆಟ್ಟಿಗೆಗೆ ಸೇರಿದೆ.
ಒಟ್ಟು 182 ಕ್ಷೇತ್ರಗಳ ಪೈಕಿ 87 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆದ ಚುನಾವಣೆ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಎರಡನೇ ಹಂತದ ಚುನಾವಣೆಯು ಈ 17ರಂದು ನಡೆಯಲಿದ್ದು 20ರಂದು ಫಲಿತಾಂಶ ಹೊರಬೀಳಲಿದೆ.