ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ದಕ್ಷಿಣ ವಲಯಕ್ಕೆ ಸೋಲು

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): ಅಭಿಷೇಕ್ ಬಾಡ್ಕರ್ (74) ಅವರ ಆಕರ್ಷಕ ಬ್ಯಾಟಿಂಗ್ ಬಲವಿದ್ದರೂ ದಕ್ಷಿಣ ವಲಯ ತಂಡದವರು ಜೆ.ಕೆ.ಬೋಸ್ ಟ್ವೆಂಟಿ-20 ಟೂರ್ನಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಅಂತರದಿಂದ ಉತ್ತರ ವಲಯ ವಿರುದ್ಧ ಸೋಲನುಭವಿಸಿತು.

ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟ (ಎಸ್‌ಜೆಎಫ್‌ಐ) ಆಶ್ರಯದ ಈ ಟೂರ್ನಿಯ ಗುರುವಾರದ ಹಣಾಹಣಿಯಲ್ಲಿ ಕಳೆದ ಬಾರಿಯ ಚಾಂಪಿಯನ್ ದಕ್ಷಿಣ ವಲಯ ಮೊದಲು ಬ್ಯಾಟ್ ಮಾಡಿ 20 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ ಗಳಿಸಿತು.

ಗುರಿಯನ್ನು ಬೆನ್ನ ಟ್ಟಿದ ಉತ್ತರ ವಲಯದವರು ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿದರು. ರೋಚಕ ಅಂತ್ಯ ಕಂಡ ಈ ಪಂದ್ಯದಲ್ಲಿ ಉತ್ತರ ವಲಯ ಐದು ವಿಕೆಟ್‌ಗಳ ನಷ್ಟಕ್ಕೆ 183 ರನ್ ಸೇರಿಸಿತು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ವಲಯ: 20 ಓವರುಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 180 (ತನ್ವೀರ್ 38, ಅಭಿಷೇಕ್ ಬಾಡ್ಕರ್ 74, ಮಲ್ಲಿಕಾಚರಣ್ ವಾಡಿ 26; ರಾಕೇಶ್ ತಪ್ಲಿಯಾಲ್ 36ಕ್ಕೆ2, ಅಮಿತ್ ಚೌಧರಿ 31ಕ್ಕೆ2); ಉತ್ತರ ವಲಯ: 20 ಓವರುಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 183 (ಸಿದ್ದಾರ್ಥ್ ಶರ್ಮ 70, ಜಸ್ವಿಂದರ್ ಸಿದ್ದು 38, ಜಿ.ಎಸ್.ವಿವೇಕ್ 25; ಮಲ್ಲಿಕಾಚರಣ್ ವಾಡಿ 26ಕ್ಕೆ2);
ಪಂದ್ಯ ಶ್ರೇಷ್ಠ: ಸಿದ್ದಾರ್ಥ್ ಶರ್ಮ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT