ಓವೆಲ್ ಮೈದಾನದಲ್ಲಿ ಚೀಲ ಹೊತ್ತು 75 ಮೀಟರ್ ದೂರ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರೈತರು ತಮ್ಮ ಸಾಮರ್ಥ್ಯ ಮೆರೆದರು. ಮಹಿಳೆಯರೂ ಹೀಂದೆ ಬೀಳಲಿಲ್ಲ. ನೀರು ತುಂಬಿದ ಕೊಡಗಳನ್ನು ಹೊತ್ತು ಓವೆಲ್ ಕ್ರೀಡಾಂಗಣದಲ್ಲಿ ಓಡಿದರು. ಪಿರಿಯಾಪಟ್ಟಣ ತಾಲ್ಲೂಕಿನ ಕೋಗಿಲವಾಡಿಯ ಮಾಲಿನಿ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದರು.
ಫಲಿತಾಂಶಗಳು:
ಪುರುಷರು: ಕಲ್ಲುಗುಂಡು ಎತ್ತುವ ಸ್ಪರ್ಧೆ: ತಮ್ಮೇಗೌಡ (ನಾಗನಹಳ್ಳಿ)-1, ಎಸ್. ಶಶಿಕುಮಾರ್ (ಕೆನ್ನನಕೊಪ್ಪಲು)-2, ರಂಗಸ್ವಾಮಿ (ನಂಜನಗೂಡು)-3, ಸಾಗರ್ (ಪಿರಿಯಾ ಪಟ್ಟಣ)-3.
ಕೆಸರುಗದ್ದೆ ಓಟ: ಮನೋಜಕುಮಾರ್ (ತೀ. ನರಸೀಪುರ)-1, ಪ್ರಸನ್ನ (ಹುಣಸೂರು)-2, ಲಿಂಗರಾಜು (ತೀ. ನರಸೀಪುರ)-3. ಭಾರದ ಚೀಲ ಹೊತ್ತು ಓಟ: ಮನೋಜಕುಮಾರ್ (ತಿ. ನರಸೀಪುರ)-1, ಸಾಗರ್ (ಕೋಮಲಾಪುರ)-2, ಪ್ರಸನ್ನ (ಕಿರಿಜಾಜಿ, ಹುಣಸೂರು ತಾಲ್ಲೂಕು)-3.
ಮಹಿಳೆಯರು: ತುಂಬಿದ ಕೊಡ ಹೊತ್ತು ಓಟ: ಮಾಲಿನಿ (ಕೋಗಿಲವಾಡಿ, ಪಿರಿಯಾಪಟ್ಟಣ ತಾಲ್ಲೂಕು)-1, ನಗೀನಾಭಾನು (ಮಿರ್ಲೆ, ಕೆ.ಆರ್. ನಗರ ತಾಲ್ಲೂಕು)-2, ಸಿ.ಎಂ. ರೇಶ್ಮಾ (ದೇವರಸನಹಳ್ಳಿ, ನಂಜನಗೂಡು)-3.