`ಗುರುವಾರದ ಬಳಿಕ ಒಂದು ವಾರವಷ್ಟೇ ಅವಕಾಶ. ಬಳಿಕ ಗುಂಡಿಗಳಿಗೆ ಸಂಬಂಧಿಸಿದಂತೆ ದೂರು ಬಂದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.
`ಕಂದಾಯ ವಿಭಾಗದ ಪ್ರತಿಯೊಬ್ಬ ಸಿಬ್ಬಂದಿ ನಿತ್ಯ 25 ಮನೆಗಳಿಗೆ ಭೇಟಿಕೊಟ್ಟು ತೆರಿಗೆ ಪಾವತಿ ಮಾಹಿತಿ ಕಲೆಹಾಕಬೇಕು. ಪ್ರಮಾದಗಳು ಕಂಡುಬಂದರೆ ದಂಡ ವಿಧಿಸಬೇಕು' ಎಂದು ಸೂಚಿಸಿದರು. `ಪ್ರತಿ ಶನಿವಾರ ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ ತ್ಯಾಜ್ಯ ವಿಲೇವಾರಿಗೆ ದೊಡ್ಡ ಆಂದೋಲನ ನಡೆಸಲಾಗುವುದು. ಅದಕ್ಕೆ ಎಲ್ಲ ಅಧಿಕಾರಿಗಳು ಸನ್ನದ್ಧರಾಗಬೇಕು. ಮಾರುಕಟ್ಟೆ ಸ್ವಚ್ಛತಾ ಆಂದೋಲನ ಮುಂದಿನ ಸೋಮವಾರದಿಂದ ಶುರುವಾಗಲಿದೆ' ಎಂದರು.
`ನಗರದಲ್ಲಿ ಹಾಕಲಾದ ಹೋರ್ಡಿಂಗ್ಗಳಿಗೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡಿ, ದುಡ್ಡು ಪಡೆಯುವಾಗ ಬಿಬಿಎಂಪಿಗೆ ಅದರ ಮಾಲೀಕರಿಂದ ಏಕೆ ತೆರಿಗೆ ಬರುತ್ತಿಲ್ಲ' ಎಂದು ಪ್ರಶ್ನಿಸಿದರು. `ಅನಧಿಕೃತ ಹೋರ್ಡಿಂಗ್ಗಳ ತೆರವು ಕಾರ್ಯಾಚರಣೆ ಚುರುಕುಗೊಳಿಸಬೇಕು' ಎಂದು ಆದೇಶಿಸಿದರು. ಆಯುಕ್ತ ಎಂ.ಲಕ್ಷ್ಮಿನಾರಾಯಣ ಮತ್ತು ಎಲ್ಲ ವಿಭಾಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.