ಲಂಡನ್(ಪಿಟಿಐ): ಗುಜರಾತ್ನೊಂದಿಗೆ ತನ್ನೆಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದ ಇಂಗ್ಲೆಂಡ್, ಹತ್ತು ವರ್ಷಗಳ ನಂತರ ಪುನಃ ಆ ರಾಜ್ಯದೊಂದಿಗೆ ತನ್ನ ವ್ಯವಹಾರಿಕ ಸಂಬಂಧಗಳನ್ನು ಮುಂದುರವರೆಸಲು ನಿರ್ಧರಿಸಿದೆ.
ಈ ಸಂಬಂಧ ಗುಜರಾತ್ಗೆ ಭೇಟಿ ನೀಡಿ ಉಭಯ ದೇಶ ಮತ್ತು ರಾಜ್ಯಗಳ ಪರಸ್ಪರ ಸಹಕಾರ, ಹಿತಾಸಕ್ತಿ ಹಾಗೂ ಅವಕಾಶಗಳು ಸೇರಿದಂತೆ 2002ರ `ಗೋಧ್ರಾ ಹತ್ಯಾಕಾಂಡ~ದಲ್ಲಿ ಮಡಿದ ಬ್ರಿಟಿಷ್ ಪ್ರಜೆಗಳ ಕುಟುಂಬಗಳಿಗೆ ನ್ಯಾಯ ಒದಗಿಸುವ ಕುರಿತು ಚರ್ಚಿಸುವಂತೆ ಭಾರತದಲ್ಲಿರುವ ತನ್ನ ರಾಯಭಾರಿ ಜೇಮ್ಸ ಬೆವನ್ ಅವರಿಗೆ ಬ್ರಿಟನ್ ಸರ್ಕಾರ ಸೂಚಿಸಿದೆ.
ಇಂಗ್ಲೆಂಡ್ನ ಈ ನಿರ್ಧಾರವನ್ನು ಸ್ವಾಗತಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, `ದೇವರು ದೊಡ್ಡವನು. ರಾಜ್ಯದೊಂದಿಗೆ ಇಂಗ್ಲೆಂಡ್ ಪುನಃ ವ್ಯವಹಾರ ಮುಂದುವರೆಸಲು ಇಚ್ಛಿಸಿರುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ~ ಎಂದು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಗುಜರಾತ್ನಲ್ಲಿ ನೂರಾರು ಮಂದಿ ಅಮಾಯಕರನ್ನು ಬಲಿ ತೆಗೆದುಕೊಂಡ 2002ರ `ಗೋಧ್ರಾ ಹತ್ಯಾಕಾಂಡ~ವನ್ನು ಪ್ರಬಲವಾಗಿ ಖಂಡಿಸಿದ್ದ ಇಂಗ್ಲೆಂಡ್, ಆನಂತರ ಆ ರಾಜ್ಯದೊಂದಿಗಿನ ತನ್ನೆಲ್ಲಾ ವ್ಯವಹಾರಿಕ ಸಂಬಂಧಗಳನ್ನು ಸ್ಥಗಿತಗೊಳಿಸಿತ್ತು.