ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 24-2-1961

Last Updated 23 ಫೆಬ್ರುವರಿ 2011, 15:15 IST
ಅಕ್ಷರ ಗಾತ್ರ

ವಿಶಾಲ ತತ್ವಗಳ ಬಗ್ಗೆ ನಾಯಕರಲ್ಲಿ ಒಮ್ಮತ
ಬೆಂಗಳೂರು, ಫೆ. 23 - ಮೈಸೂರು ಕಾಂಗ್ರೆಸ್ಸಿನ ಬಿಕ್ಕಟ್ಟನ್ನು ಪರಿಹರಿಸಲು ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ, ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿಯವರು ನಡೆಸುತ್ತಿರುವ ಪ್ರಯತ್ನದ ಸಂಬಂಧದಲ್ಲಿ ಇಂದು ರಾತ್ರಿ ಎರಡನೇ ಬಾರಿಗೆ ಉಭಯತ್ರರ ನಡುವೆ 45 ನಿಮಿಷಗಳ ಮಾತುಕತೆ ನಡೆಯಿತು. ಅಡಕವಾಗಿರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಶಾಲತತ್ವಗಳ ಬಗ್ಗೆ ಉಭಯ ನಾಯಕರಲ್ಲಿ ಒಮ್ಮತವಿದೆಯೆಂದೂ ಇಂದಿನ ಮಾತುಕತೆ ಮುಗಿದ ನಂತರ ತಿಳಿದು ಬಂತು.

ಮುಂಬೈಗೆ ಬ್ರಿಟನ್ ರಾಜ ದಂಪತಿ ಪ್ರಯಾಣ
ಬೆಂಗಳೂರು, ಫೆ. 23 - ಇಲ್ಲಿಂದ 37 ಮೈಲಿ ದೂರದ ಸುಂದರ ಗಿರಿಧಾಮ ನಂದಿದುರ್ಗದಲ್ಲಿ ನಿಸರ್ಗದ ಸೊಬಗನ್ನು ಸವಿದು ಸುಮಾರು 38 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿಅನುಭವಿಸಿದ ಬ್ರಿಟನ್ನಿನ ಎರಡನೆಯ ಎಲಿಜಬೆತ್ ಹಾಗೂ ಅವರ ಪತಿ ರಾಜಕುಮಾರ ಫಿಲಿಪ್ ಇಂದು ಮಧ್ಯಾಹ್ನ ವಿಮಾನದಲ್ಲಿ ಮುಂಬೈಗೆ ಪ್ರಯಾಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT