ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 27-10-1961

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಜ್ಯಾದ್ಯಂತ ಬಸ್ ರಾಷ್ಟ್ರೀಕರಣ ಜಾರಿಗೆ
ಬೆಂಗಳೂರು, ಅ. 26 - `ಯಾವ ಅಡ್ಡಿಗಳೂ ಬಾರದಿದ್ದಲ್ಲಿ~ ತೃತೀಯ ಪಂಚವಾರ್ಷಿಕ ಯೋಜನೆಯ ಅವಧಿಯೊಳಗೆ ರಾಜ್ಯದಲ್ಲಿ ಬಸ್ ರಾಷ್ಟ್ರೀಕರಣವನ್ನು ಪೂರ್ಣವಾಗಿ ಜಾರಿಗೆ ತರುವುದಾಗಿ ರಾಜ್ಯದ ರಸ್ತೆ ಕಾರ್ಪೊರೇಷನ್ನಿನ ಉಪಾಧ್ಯಕ್ಷ ಶ್ರೀ ಎನ್. ಬಿ. ಬಾಬುರೆಡ್ಡಿ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ಸರ್ಕಾರಿ ನೌಕರಿಯಲ್ಲಿ ನಿಮ್ನವರ್ಗಕ್ಕೆ ಪ್ರಾತಿನಿಧ್ಯ
ಬೆಂಗಳೂರು, ಅ. 26 - ರಾಜ್ಯದ ಸರ್ಕಾರಿ ನೌಕರಿಯಲ್ಲಿ ನಿಮ್ನವರ್ಗ ಮತ್ತು ಗಿರಿಜನರ ಪ್ರಾತಿನಿಧ್ಯ ತೃಪ್ತಿಕರವಾಗಿಲ್ಲವೆಂದು ಕೇಂದ್ರ ಗೃಹ ಸಚಿವ ಬಿ. ಎನ್. ದಾತಾರ್ ಭಾವಿಸಿ, ವಿಶೇಷ ಆಧಾರದ ಮೇಲೆ ಈ ಕೋಮುಗಳ ಜನರನ್ನು ನೇಮಿಸಿಕೊಳ್ಳಲು ಕ್ರಮಕೈಗೊಳ್ಳುವಂತೆ ಚೀಫ್ ಸೆಕ್ರೆಟರಿಯವರಿಗೆ ತಿಳಿಸಿದರೆಂದು ಸಮಾಜ ಕಲ್ಯಾಣ ಮಂತ್ರಿ ಎನ್. ರಾಚಯ್ಯನವರು ಇಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT