ಅವರಿಗೆ ತಮಿಳು, ಹಿಂದಿ, ಮಲಯಾಳಂ ಚಿತ್ರಗಳು ಅರಸಿ ಬಂದಿವೆಯಂತೆ. ಹಾಡುಗಳಿಗೆ ಮಂಜು ಕಾರವಾರ ಸಾಹಿತ್ಯವಿದೆ. ಅಂದಹಾಗೆ ಅವರದೂ ಮೊದಲ ಹೆಜ್ಜೆ. ಚಿತ್ರದ ನಿರ್ಮಾಣೋತ್ತರ ಕಾರ್ಯಗಳೆಲ್ಲ ಪೂರ್ಣಗೊಂಡಿವೆ ಎಂದು ಹೇಳುವುದನ್ನು ನಿರ್ದೇಶಕರು ಮರೆಯಲಿಲ್ಲ. ಆದರೆ ಚಿತ್ರ ಬಿಡುಗಡೆ ಯಾವಾಗ ಎಂಬುದನ್ನು ಗುಟ್ಟಾಗಿಯೇ ಇಟ್ಟರು.
ಯುವಕರೇ ತುಂಬಿರುವ ಚಿತ್ರ ಯಶಸ್ವಿಯಾಗಲಿ ಎನ್ನುವುದು ಚಿನ್ನೇಗೌಡರ ಹಾರೈಕೆ. ಇದೇ ಇಂಗಿತ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧಾ ಹಾಗೂ ನಟ ಎಂ.ಎಸ್. ಉಮೇಶ್ ಅವರ ಮಾತಿನಲ್ಲಿ ಅಡಗಿತ್ತು. ಉಮೇಶ್ ಮಂಗಳೂರಿನಲ್ಲಿ ನಡೆದ ಚಿತ್ರೀಕರಣದ ನೆನಪುಗಳಿಗೆ ಜಾರಿದರು.