ಚೀಣಿ ಆಕ್ರಮಣಹಿಮ್ಮೆಟ್ಟಿಸಲು ಸಕಲ ತ್ಯಾಗ(ನಮ್ಮ ಅಸೆಂಬ್ಲಿ ಪ್ರತಿನಿಧಿಯಿಂದ)
ಬೆಂಗಳೂರು, ಡಿ. 3- ಮಿತ್ರದ್ರೋಹಿ ಚೀಣದ ಆಕ್ರಮಣವನ್ನು ಕೊನೆಗಾಣಿಸಿ ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ಸರ್ವ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ರಾಜ್ಯದ ಜನತೆಗೆ ನೀಡಿದ ಕರೆ ಇಂದು ವಿಧಾನ ಮಂಡಲದ ಉಭಯ ಸದನಗಳ ಎಲ್ಲ ಕಡೆಗಳಿಂದಲೂ ಪ್ರತಿಧ್ವನಿತವಾಯಿತು.