ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ಇದರಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯಿಂದ 12, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಉನ್ನತ ಶಿಕ್ಷಣ ವಿಭಾಗದ 4, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ವಿಭಾಗದ 2, ಬುಡಕಟ್ಟುಗಳ ವ್ಯವಹಾರ ಇಲಾಖೆಯ 5 ಹಾಗೂ ಅಲ್ಪಸಂಖ್ಯಾತರ ಇಲಾಖೆಯು ನೀಡುವ 3, ಹೀಗೆ ಒಟ್ಟು 26 ಶಿಷ್ಯ ವೇತನಗಳಲ್ಲದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇಂದಿರಾಗಾಂಧಿ ಮಾತೃತ್ವ ಸಹಯೋಗ ಹಾಗೂ ಧನಲಕ್ಷ್ಮಿ ಯೋಜನೆಗಳು, ಆರೋಗ್ಯ ಇಲಾಖೆಯ ಜನನಿ ಸುರಕ್ಷಾ ಯೋಜನೆ, ಕಾರ್ಮಿಕ ಖಾತೆಯಿಂದ ಬೀಡಿ ಕೆಲಸಗಾರರಿಗೆ ಸಂಬಂಧಿಸಿದ ಮಕ್ಕಳ ಶಿಷ್ಯವೇತನ, ಮನೆ ನಿರ್ಮಾಣ ಸಹಾಯಧನ, ಬಾಲಕಾರ್ಮಿಕ ವಿಶೇಷ ಶಾಲೆಗಳ ಸ್ಟೈಫಂಡ್, ವಿಮೆಗೆ ಒಳಪಟ್ಟವರಿಗೆ ಕಾಯಂ ಅಂಗವಿಕಲ, ಅವಲಂಬಿತ, ಚಿಕಿತ್ಸಾ ವೆಚ್ಚದ ಸೌಲಭ್ಯಗಳು ಸೇರಿವೆ. ಇದೇ ಇಲಾಖೆಯಿಂದ ಪಿಎಫ್, ಪೆನ್ಶನ್ ಹಾಗೂ ಅವಧಿ ಮುನ್ನವೇ ಹಣ ಪಡೆಯುವಿಕೆ, ಉದ್ಯೋಗಿಗಳ ವಿಮೆ ಕುರಿತ ಸೌಲಭ್ಯಗಳ ಫಲಾನುಭವಿ ಇವರೆಲ್ಲರಿಗೆ ಆಗಬೇಕಾದ ಹಣ ಪಾವತಿಯನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಆಧಾರ್ ಸಂಖ್ಯೆಯ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒಳಗೊಳಿಸುವ (ಸೀಡಿಂಗ್) ಮೂಲಕ ನೈಜ ಫಲಾನುಭವಿಗೆ ಸಂಬಂಧಿತ ನಗದು ಸಂದಾಯವಾಗಬೇಕು ಎನ್ನುವುದೇ ಇದರ ಮೂಲ ಉದ್ದೇಶವಾಗಿದೆ ಎಂದು ವಿವರಿಸಿದರು.