ಜನರ ಪ್ರಾಣದ ಜೊತೆ ಜಲಮಂಡಳಿ ಆಟ
ಬಿ.ಬಿ.ಎಂ.ಪಿ. ಕಾಚರಕನಹಳ್ಳಿ ವಾರ್ಡ್ ನಂ. 29ರ ವ್ಯಾಪ್ತಿಗೆ ಬರುವ ಎಚ್. ಬಿ. ಆರ್. ಬಡಾವಣೆ, 1ನೇ ಹಂತ, 1ನೇ ಬ್ಲಾಕ್ನ ಜ್ಯೋತಿನಗರದ ಮುಖ್ಯರಸ್ತೆಯಲ್ಲಿ ಜಲಮಂಡಳಿ ಇ - 1 ವ್ಯಾಪ್ತಿಗೆ ಬರುವ ಒಳಚರಂಡಿಯ ಮ್ಯಾನ್ ಹೋಲ್ಗಳು, ರಸ್ತೆಯ ಮಟ್ಟಕ್ಕಿಂತ ಮೂರು ನಾಲ್ಕು ಅಡಿಗಳಷ್ಟು ಆಳವಾಗಿವೆ.
ಪಾದಚಾರಿಗಳು, ವಾಹನ ಚಾಲಕರು ಹಾಗೂ ಮಕ್ಕಳು ಆಟವಾಡುತ್ತಾ ಅದೆಷ್ಟೊ ಬಾರಿ ಈ ಗುಂಡಿಯಲ್ಲಿ ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡಿದ್ದಾರೆ.
ಮ್ಯಾನ್ ಹೋಲ್ಗಳನ್ನು ಭೂಮಿಯ ಮಟ್ಟಕ್ಕೆ ಎತ್ತರಿಸಲು ಸಂಬಂಧಪಟ್ಟ ಜಲಮಂಡಳಿ ಇ - 1 ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ, ಹಾಗೂ ಸಹಾಯಕ ಅಭಿಯಂತರವರಿಗೂ ಹಲವು ಬಾರಿ ದೂರು ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ. ಸಾರ್ವಜನಿಕ ಸಮಸ್ಯೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳೇ ನಿರ್ಲಕ್ಷ್ಯ ತೋರಿದರೆ ಈ ಸಮಸ್ಯೆಯನ್ನು ಬಗೆ ಹರಿಸುವವರು ಯಾರು? ಹಿರಿಯ ಅಧಿಕಾರಿಗಳು ಹಾಗೂ ಜಲಮಂಡಳಿ ಅಧ್ಯಕ್ಷರು ತುರ್ತು ಕ್ರಮ ಕೈಗೊಳ್ಳಲು ಮನವಿ.
ಪಿ. ಮಂಜೇಶ್