ಹೈದರಾಬಾದ್ (ಪಿಟಿಐ) : ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾದ ಕರ್ನಾಟಕ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಬಿ. ವಿ. ಶ್ರೀನಿವಾಸ ರೆಡ್ಡಿ ಹಾಗು ಮೆಹಫೂಜ್ ಅಲಿಖಾನ್ ಅವರುಗಳ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 19ರವರೆಗೆ ವಿಸ್ತರಿಸಿ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಇಲ್ಲಿ ಆದೇಶಿಸಿದೆ.