ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಆಧಾರದ ಪಕ್ಷ ಉಳಿಯಲ್ಲ: ಶಾಸಕ

Last Updated 2 ಜನವರಿ 2014, 9:45 IST
ಅಕ್ಷರ ಗಾತ್ರ

ತುಮಕೂರು: ಜಾತಿ ಪದ್ಧತಿ ದೊಡ್ಡ ಈ ದೇಶದ ದುರಂತ. ಜಾತಿ ಮೇಲೆ ನಿಲ್ಲುವ ಪಕ್ಷ ಅಥವಾ ಸಂಸ್ಥೆ ಉಳಿಯುವುದಿಲ್ಲ ಎಂದ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.

ತಾಲ್ಲೂಕಿನ ಹೊನ್ನುಡಿಕೆ ಗ್ರಾಮ­ದಲ್ಲಿ ಈಚೆಗೆ ನಡೆದ ಸನ್ಮಾನ ಸಮಾರಂಭ­ದಲ್ಲಿ ಬೆಳ್ಳಿ ಗದೆ ಸ್ವೀಕರಿಸಿ ಮಾತನಾಡಿದ ಅವರು, ಹೆಬ್ಬೂರು– ಗೂಳೂರು ಏತ ನೀರಾವರಿ ಯೋಜನೆಯಿಂದ 14 ವರ್ಷದ ನಂತರ ಹೊನ್ನುಡಿಕೆ ಕೆರೆ ತುಂಬಿದೆ ಎಂದರು.

ಗೂಳೂರು ಏತ ನೀರಾವರಿ ಯೋಜನೆ­ಯಿಂದ ಹೊನ್ನುಡಿಕೆ ಕೆರೆಗೆ ಸತತವಾಗಿ ನೀರು ಹರಿಸಲಾಗಿದೆ.  ವೀರನಾಯಕನ­ಹಳ್ಳಿ, ಹುಳ್ಳೇನಹಳ್ಳಿ, ಹೊಳಕಲ್ಲು, ಮುಳುಕುಂಟೆ, ಸಾಸಲು, ಅಮಾನಿಕೆರೆ­ಗಳಿಗೆ ಹೇಮಾವತಿ ನೀರು ಹರಿಸಲಾಗಿದೆ ಎಂದು ತಿಳಿಸಿದರು.
ಶಾಂತವೀರ ಸ್ವಾಮೀಜಿ, ತಾ.ಪಂ. ಸದಸ್ಯೆ ಭಾರತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜು, ಮಖಂಡರಾದ ಆನಂದಪ್ಪ, ಯೋಗೀಶ್, ಸಿದ್ದೇಗೌಡ, ಸಾಸಲುಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT