ತುಮಕೂರು: ಜಾತಿ ಪದ್ಧತಿ ದೊಡ್ಡ ಈ ದೇಶದ ದುರಂತ. ಜಾತಿ ಮೇಲೆ ನಿಲ್ಲುವ ಪಕ್ಷ ಅಥವಾ ಸಂಸ್ಥೆ ಉಳಿಯುವುದಿಲ್ಲ ಎಂದ ಶಾಸಕ ಬಿ.ಸುರೇಶ್ಗೌಡ ಹೇಳಿದರು.
ತಾಲ್ಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಈಚೆಗೆ ನಡೆದ ಸನ್ಮಾನ ಸಮಾರಂಭದಲ್ಲಿ ಬೆಳ್ಳಿ ಗದೆ ಸ್ವೀಕರಿಸಿ ಮಾತನಾಡಿದ ಅವರು, ಹೆಬ್ಬೂರು– ಗೂಳೂರು ಏತ ನೀರಾವರಿ ಯೋಜನೆಯಿಂದ 14 ವರ್ಷದ ನಂತರ ಹೊನ್ನುಡಿಕೆ ಕೆರೆ ತುಂಬಿದೆ ಎಂದರು.
ಗೂಳೂರು ಏತ ನೀರಾವರಿ ಯೋಜನೆಯಿಂದ ಹೊನ್ನುಡಿಕೆ ಕೆರೆಗೆ ಸತತವಾಗಿ ನೀರು ಹರಿಸಲಾಗಿದೆ. ವೀರನಾಯಕನಹಳ್ಳಿ, ಹುಳ್ಳೇನಹಳ್ಳಿ, ಹೊಳಕಲ್ಲು, ಮುಳುಕುಂಟೆ, ಸಾಸಲು, ಅಮಾನಿಕೆರೆಗಳಿಗೆ ಹೇಮಾವತಿ ನೀರು ಹರಿಸಲಾಗಿದೆ ಎಂದು ತಿಳಿಸಿದರು.
ಶಾಂತವೀರ ಸ್ವಾಮೀಜಿ, ತಾ.ಪಂ. ಸದಸ್ಯೆ ಭಾರತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜು, ಮಖಂಡರಾದ ಆನಂದಪ್ಪ, ಯೋಗೀಶ್, ಸಿದ್ದೇಗೌಡ, ಸಾಸಲುಮೂರ್ತಿ ಭಾಗವಹಿಸಿದ್ದರು.