ಬೆಂಗಳೂರು: `ಕರ್ನಾಟಕ ಜಾನಪದ ಅಕಾಡೆಮಿಗೆ ವಾರ್ಷಿಕ 2 ಕೋಟಿ ರೂಪಾಯಿಯ ಅನುದಾನ ಒದಗಿಸುವುದರೊಂದಿಗೆ ಜಾನಪದ ಕಲೆಯ ಬರಹವನ್ನು ಪಠ್ಯದಲ್ಲಿ ಅಳವಡಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಅಕಾಡೆಮಿಯ ಅಧ್ಯಕ್ಷ ಬಾನಂದೂರು ಕೆಂಪಯ್ಯ ಮನವಿ ಮಾಡಿದರು.
ತಮ್ಮ ಅಧಿಕಾರಾವಧಿಯಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸರ್ಕಾರ 45 ಲಕ್ಷ ರೂಪಾಯಿ ಅನುದಾನವನ್ನು ಒದಗಿಸುತ್ತಿದ್ದು, ಜಾನಪದ ಕಲಾವಿದರ ಕ್ಷೇಮನಿಧಿಗೆ 20 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಗ್ರಾಮೀಣ ಭಾಗದಲ್ಲೇ ಹೆಚ್ಚಾಗಿ ವಾಸಿಸುವ ಜಾನಪದ ಕಲಾವಿದರಲ್ಲಿ ಬಹುತೇಕರು ಕಡುಬಡವರಿದ್ದು, ಹೆಚ್ಚಿನ ಅನುದಾನ ಅಗತ್ಯವಿದೆ~ ಎಂದರು.
ಬುಡಕಟ್ಟು, ಕರಕುಶಲ ಹಾಗೂ ಜಾನಪದ ಕಲೆ ಪರಿಚಯಿಸಲು ದಕ್ಷಿಣ ಭಾರತ ಜಾನಪದ ಸಮಾವೇಶಹಮ್ಮಿಕೊಳ್ಳಲಾಗುವುದು ಎಂದರು.