ಡಿವಿಜಿ, ಭೈರಪ್ಪ, ಲಂಕೇಶ್, ತೇಜಸ್ವಿ, ಕಣವಿ ಮುಂತಾದವರಿಗೆ ಜ್ಞಾನ ಪೀಠ ಬಂದಿಲ್ಲ ಎಂದರೆ ಅವರ ಕೊಡುಗೆ ಜ್ಞಾನಪೀಠ ಪಡೆದವರಿಗಿಂತ ಕಡಿಮೆಯದಲ್ಲ. ಹಾಗಾಗಿ ಜ್ಞಾನಪೀಠ ಪ್ರಶಸ್ತಿ ಬಂದವರಷ್ಟನ್ನೇ ಬಿಂಬಿಸಿದರೆ ಅದು ಕನ್ನಡ ಸಾಹಿತ್ಯಲೋಕದ ಪ್ರಾತಿನಿಧಿಕ ಸ್ವರೂಪ ಆಗುವುದಿಲ್ಲ. ಶಾಲೆ, ಕಾಲೇಜು, ಪರಿಷತ್ ಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಸ್ಮರಣೆ ಯನ್ನೂ ನಿರಂತರ ಮಾಡಿಕೊಳ್ಳುವಂತಾಗಲಿ. ಸಂಗೀತ, ಚಿತ್ರಕಲೆ, ನಾಟಕ, ನೃತ್ಯದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಹೆಸರು ಮಾಡಿದವರಿದ್ದಾರೆ. ಅವರ ನೆನಪೂ ಬೇಡವೆ?
–ಜಿ.ಎನ್.ನಿಶಾಂತ, ಬೆಂಗಳೂರು.