ಗುಬ್ಬಿ ವೀರಣ್ಣ ರಂಗಮಂದಿರ ಪುನರಾರಂಭಿಸಿ
ರಾಜಧಾನಿ ಬೆಂಗಳೂರು ನಗರದಲ್ಲಿ ಕರ್ನಾಟಕದ ವೃತ್ತಿರಂಗಭೂಮಿಯವರಿಗೆ ಇರುವ ಏಕೈಕ ರಂಗಮಂದಿರ ‘ಗುಬ್ಬಿ ವೀರಣ್ಣ ರಂಗ ಮಂದಿರ’. ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿರುವ 15-20 ನಾಟಕ ಕಂಪೆನಿಗಳು ಇಲ್ಲಿ ಸರದಿಯ ಮೇಲೆ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿವೆ. ಒಂದೊಂದು ನಾಟಕ ಕಂಪೆನಿಗೆ ಒಂದು, ಒಂದೂವರೆ ವರ್ಷಗಳ ಕಾಲ ರಂಗಮಂದಿರವನ್ನು ಬಾಡಿಗೆಗೆ ನೀಡಲಾಗುತ್ತದೆ. ನಗರಪಾಲಿಕೆಗೆ ಇದರಿಂದ ಒಳ್ಳೆಯ ಆದಾಯವೂ ಇದೆ.Last Updated 21 ಜನವರಿ 2014, 19:30 IST