ಬೆಂಗಳೂರು: ‘ಹಾಸ್ಯಬಳಗ ಮತ್ತು ಗಾನವಿನೋದಿನಿ ವತಿಯಿಂದ ಡಿ. 25ರಂದು 19ನೇ ಹಾಸ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹಾಸ್ಯ ಬಳಗದ ಸಂಚಾಲಕ ರಿಚರ್ಡ್ ಲೂಯಿಸ್ ಹೇಳಿದರು.
ಜಯನಗರದ ನ್ಯಾಷನಲ್ ಕಾಲೇಜಿನ ಎಚ್.ಎನ್.ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ. ಹಿರಿಯ ರಂಗನಟ ಮಾಸ್ಟರ್ ಹಿರಣ್ಣಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಯ ಸಾಹಿತಿ ಪಾರ್ವತೀಸುತ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಹಾಸ್ಯ ಬಳಗದ ಸಂಚಾಲಕರಾದ ಎಂ.ಆರ್.ಸುಬ್ಬರಾಮ್, ಕೆ.ಶ್ರೀನಿವಾಸ್, ಎನ್.ರಾಮನಾಥ್ ಉಪಸ್ಥಿತರಿದ್ದರು.