ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕರ್ನಾಟಕದ ರಾಬಿನ್ ಉತ್ತಪ್ಪ ವಾಘ್ಗೆ ಎಲ್ಬಿಡಬ್ಲ್ಯುಗೆ ಬಲೆಗೆ ಬಿದ್ದರು. ಅಂಪೈರ್ ನಿರ್ಣಯ ನೀಡುವಲ್ಲಿ ಸ್ವಲ್ಪ ತಡೆದು ನಂತರ ಕೈಎತ್ತಿದರು. ಪೆವಿಲಿಯನ್ನತ್ತ ಹೊರಟ ರಾಬಿನ್ನತ್ತ ಕಿಚಾಯಿಸುವ ಮಾತುಗಳು ತೂರಿಬಂದವು. ಅದಕ್ಕೆ ರಾಬಿನ್ ತಿರುಗಿ ಉತ್ತರ ಕೊಟ್ಟರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಆಗಲೂ ಅಂಪೈರ್ಗಳು ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸಿದರು.