ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿಯಲ್ಲಿ ಪೂಜೆ ಸಲ್ಲಿಸಿದ ಸಚಿನ್

Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ತಿರುಪತಿ (ಪಿಟಿಐ): ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರು ಶನಿವಾರ ನಸುಕಿನಲ್ಲಿ ತಿರುಮಲದಲ್ಲಿರುವ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಬಿಳಿ ಶರ್ಟ್ ಹಾಗೂ ಪಂಚೆ ಧರಿಸಿದ್ದ ತೆಂಡೂಲ್ಕರ್ ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ ಸಲ್ಲಿಸಿದರು. `ಸುಪ್ರಭಾತ ಪಠಣ ಸೇವಾ  ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ದೇವಾಲಯದ ಮೂಲಗಳು ತಿಳಿಸಿವೆ. ಅವರು ದೇವಾಲಯದಲ್ಲಿ 20 ನಿಮಿಷ ಇದ್ದರು. ಸಚಿನ್ ಮಧ್ಯ ರಾತ್ರಿಯೇ ತಿರುಮಲಕ್ಕೆ ಆಗಮಿಸಿದ್ದರು. ಅವರನ್ನು ಟಿಟಿಡಿ ಮುಖ್ಯಸ್ಥ ಬಾಪಿರಾಜು ಬರಮಾಡಿಕೊಂಡರು.

ಪೂಜೆ ಸಲ್ಲಿಸಿದ ಬಳಿಕ ತೆಂಡೂಲ್ಕರ್ ಅವರಿಗೆ ಪವಿತ್ರ ನೀರು, ಪವಿತ್ರ ರೇಷ್ಮೆ ಬಟ್ಟೆ ಹಾಗೂ ಲಡ್ಡು ನೀಡಲಾಯಿತು. ಬಳಿಕ ಪುರೋಹಿತರು ಪ್ರಾಚೀನ ರಂಗನಾಯಕ ಮಂಟಪದಲ್ಲಿ ಪಠಣ ವೈದಿಕ ಮಂತ್ರ ಹೇಳಿ ಸಚಿನ್ ಅವರನ್ನು ಆಶೀರ್ವದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT